ಸ್ವರಚಿತ ಕವನಗಳು

ಸ್ವರಚಿತ ಕವನಗಳು

Thursday, August 24, 2006

ಓ,ಪ್ರಭುವೇ...

ನಮ್ಮ ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಅವರು ಅಜಾತ ಶತ್ರು. ಅವರು ಪ್ರಧಾನಿಯಾದ ಸಂದರ್ಭದಲ್ಲಿ ನಾನು ಬರೆದ ಕವನವಿದು:- 
 ಓ ಪ್ರಭುವೇ, ಇನ್ನು ಪರವಾಯಿಲ್ಲ, ಕೆಸರಿನಲ್ಲಿ ಕಮಲ ಹುಟ್ಟಿತು ಬಹುಜನ ಹೃದಯದ ಹೂವರಳಿತು ಹೊಸಗಾಳಿ ಬೀಸಲುಬಹುದು ಬದಲಾವಣೆ ಆಗಲೂಬಹುದು. 
 ಈಗಲೂ ಎಲ್ಲ ನೆನಪುಂಟು- ಎರಡೆರಡು ವರ್ಷಗಳ ಸರ್ಕಸ್ ಕಾಲೆಳೆದು ಕೆಳಗೆ ಬಿದ್ದರು ಸ್ಕೌಂಡ್ರಲ್ಸ್, ಗತಿಶೀಲತೆ ಕಾಣದೆಹೋದ ಪಥ ಭ್ರಾಂತರು ಹೌದು,ಮುಗಿಲ ಮೋಹದಿ ಕಳಚಬಾರದು ಭೂಮಿಗಿಳಿದ ಬೇರು. ಬೆಳಕು ಕಾಣದದೋ ಗೊಂ(ಗೊಂ)ಡಾರಣ್ಯ...

 ಸೂರ್ಯಕಾಂತಿ ಬಂದಿತು ಸತ್ಯ ಶಾಂತಿ ಅರಸಿತು ಭಾರತಾಂಬೆ ನಾಲ್ಕು ದಶಕಗಳ ತಪೋಧನನ ತಾನೆ ಮೆಚ್ಚಿ ಒಲಿದಳು... ಐವತ್ತರ ಸ್ವಾತಂತ್ರೋತ್ಸವ ಸಂಭ್ರಮದಲಿ ಧೀರಸುತನ ಏಕಾಕಿ ಆಲಿಂಗನ ಗೈದಳು. 

 ಸಾಧಕನೆತ್ತರಕೇರಿ ಕಂಡ ವ್ಯಕ್ತಿತ್ವ ವಿಸ್ತಾರ ಜನತೆಗೆ ತಾನೆ ತೋರಿ ನಲಿದಳು. ಕುಬ್ಜರಲ್ಲಿ ಕುಬ್ಜರು “ಸೇವೆ” ಹೆಸರಿನಲಿ ತಮ್ಮ ಸಾವೆ ಕಂಡರು. ಅಗೋ ಜತೆಗೆ ಹೆಜ್ಚೆ ಇಡುವೆವು ಸಂಗಡಿಗರ ಪ್ರತಿಜ್ಞೆ.. ಆಜನ್ಮ ಬ್ರಹ್ಮಚಾರಿ ಲೋಕವಿಹಾರಿ ಅಟಲ್ ಬಿಹಾರಿಯೊಂದಿಗೇ ವಚನಬದ್ಧತೆ- ಸತ್ವಪೂರ್ಣ ದೇಶಹಿತಕಾಗಿ, ಸರ್ವಜನತೆಯ ಸುಖಕಾಗಿ. 

 “ಓ ಪ್ರಭುವೇ, ಒಡಕು ಮೂಡದಿರಲಿ’’ ಮಹಾಜನತೆ ಜನಾರ್ದನನ ಸ್ಮರಿಸಿತು. ಇನ್ನು ಪರವಾಯಿಲ್ಲ, ಬರುವವು ಸಹಬಾಳ್ವೆಯ ಸಿಹಿದಿನಗಳು... ಸರ್ವಧರ್ಮ ಪ್ರಿಯ ಪ್ರಾಮಾಣಿಕ ಪಂಡಿತ ಪರಮ ನಿಷ್ಠುರವಾಗಿ ನೇತೃತ್ವದಿ ಹೊತ್ತ ನಂಬಿಕೆ ವಿಶ್ವಾಸಗಳು. 

 ಆ ದೇವನ ಇಚ್ಚೆಯಂತೆ ಎತ್ತರಕೇರಿದ ಜೀವ- 
”ಮೇರೇ ಪ್ರಭು! ಮುಝೇ ಇತನೀ ಊಂಛಾಯಿ ಕಭೀ ಮತ್ ದೇನಾ- ಉದರ್ ಘಾಸ್  ಭೀ ನಹೀ ಪೈದಾ ಹೋತಿ....ಎಂದು ಹಾಡಿದ ಕವಿಹೃದಯಿ... ವಾಗ್ಝರಿಯಲಿ ಎಲ್ಲರ ಸೆಳೆದಂಥ ವರ್ಚಸ್ವಿ ನೇತಾರ! 

ಇಂದು ಈತನ ತಲೆಮೇಲೆ ಕಾರಭಾರ... ಮುಂದಿನ ಅಸಂಖ್ಯ ಸವಾಲುಗಳಿಗೆ- ಮುಖಾಮುಖಿಯಾದ ಸರದಾರ ವಿಶ್ವಮುತ್ಸದ್ದಿ ತಾ ಬೆರಗೊಡೆವ ಧೀರ. ಕಾಲದ ಉತ್ತರ ನಿಲ್ಲುವುದಿಲ್ಲ, ಇಲ್ಲ ಇಲ್ಲ,ಒಬ್ಬ ಪೋಲಿಟಿಕಲ್ ಸೈನ್ಸ್ ವಿದ್ಯಾರ್ಥಿಗೂ ಇವರೇ ನಮ್ಮ ಪ್ರಧಾನಿ ಎಂದು ಮಾದರಿ ಪಾಠ ಹೇಳಲುಬಹುದಲ್ಲ, 

ಇನ್ನು ಪರವಾಯಿಲ್ಲ, ಕಡೆಗೂ ದಕ್ಷತೆಗೆ ದಕ್ಕಿತು ಅಧಿಕಾರ; ಕಾಲಜ್ಞಾನ ಹೇಳಿದೆಯಲ್ಲ... 
 ಮುಂದೊಂದು ದಿನ ಬರಲಿದೆ ಸುಭಿಕ್ಷತೆ ಕಾಯಬೇಕು ನಾವು;ಸದಾ ಮೋಸವೇ.. ಇಲ್ಲ ಇಲ್ಲ... 

  -ಎಚ್.ಶಿವರಾಂ “ಉತ್ಥಾನ” ಮಾಸ ಪತ್ರಿಕೆಯಲ್ಲಿ 1999 ರಲ್ಲಿ ಪ್ರಕಟಿತ ವಾಜಪೇಯಿ ಪರಿಚಯ

No comments: